Home Local News ಕರಡಿ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ ಮನೆಗೆ ಕಾಗೇರಿ ಭೇಟಿ

ಕರಡಿ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ ಮನೆಗೆ ಕಾಗೇರಿ ಭೇಟಿ

ಶಿರಸಿ: ಆರು ದಿನಗಳ ಹಿಂದೆ ಕರಡಿ ದಾಳಿಗೆ ತುತ್ತಾಗಿದ್ದ ತಾಲೂಕಿನ ದೇವನಳ್ಳಿ ಸಮೀಪದ ಸುಂಡಳ್ಳಿಯ ಮೃತ ಓಂಕಾರ ಜೈನ್ ಅವರ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ 7.50 ಲಕ್ಷ ರೂ. ಪರಿಹಾರಧನದ ನೆರವಿನ ಆದೇಶ ಪ್ರತಿ ಹಸ್ತಾಂತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.