Home Special News ಕಾಲು ನೋವು ತಾಳಲಾರದೇ ಬಾವಿಗೆ ಹಾರಿದ ವ್ಯಕ್ತಿ ಸಾವು.

ಕಾಲು ನೋವು ತಾಳಲಾರದೇ ಬಾವಿಗೆ ಹಾರಿದ ವ್ಯಕ್ತಿ ಸಾವು.

ಕಾಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ನೋವು ತಾಳಲಾರದೆ ಮನೆಯ ಮುಂದಿನ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ವ್ಯಕ್ತಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಬಾವಿಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

ಗಣಪತಿ ಈರ ನಾಯ್ಕ ಕೋಲ್ ಶಿರಸಿ ( 65 ) ಮೃತ ವ್ಯಕ್ತಿ. ಬಾವಿಗೆ ಬಿದ್ದಿದ್ದ ಈತನನ್ನು ಅಗ್ನಿಶಾಮಕ ದಳದವರು ಬಾವಿಯಿಂದ ಮೇಲೆಕ್ಕೆ ಎತ್ತಿದ್ದರು. ಚಿಕಿತ್ಸೆಗಾಗಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಮೃತಪಟ್ಟಿರುವುದು ದೃಡಪಡಿಸಿದ್ದಾರೆ.