Home Food ಇಂದಿನ ಅಹಾರ ಮತ್ತು ಅರೋಗ್ಯ

ಇಂದಿನ ಅಹಾರ ಮತ್ತು ಅರೋಗ್ಯ

ಅಹಾರ ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ. ಅದರೆ ಈಗ ಅಹಾರ ಕ್ರಮ ಮೊದಲಿನಂತೆ ಇಲ್ಲ. ಬೆಳಗಾದರೆ ಗ್ರಹಿಣಿಯರು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತಿಂಡಿ ಮಾಡಬೇಕು. ಮಗನಿಗೆ ಮ್ಯಾಗಿ ಅತ್ತೆಗೆ ಶುಗರ್ ಗೆ ಗೋದಿ ದೋಸೆ. ಗಂಡನಿಗೆ ಅಕ್ಕಿ ದೋಸೆ. ಹೀಗೆ ಮನೆ ಹೊಟೆಲ್ ತರಹ ಅಗಿದೆ. ಇಂದಿನ ಮಕ್ಕಳಿಗೆ ಸಾಮಾನ್ಯವಾಗಿ ಶಕ್ತಿ ಕೊಡುವಂತಹ ಅರೋಗ್ಯಕರ ಅಹಾರ ಸೇರುವದಿಲ್ಲ. ಚಿಪ್ಸ. ಚಾಕಲೇಟ್. ಕುರುಕುರೆ. ಐಸ್ಕ್ರಿಂ. ಬೇಕರಿ ಪದಾರ್ಥ. ಕರಿದ ತಿಂಡಿಗಳು, ಪೀಜಾ, ಬರ್ಗರ್ ಹೀಗೆ ಬಾಯಿಗೆ ರುಚಿ ನೀಡುವ ಅಹಾರ ಬೇಕು. ಮನೆಯಲ್ಲಿ ಅಪ್ಪ ಒಣ ಹಣ್ಣು ತಂದು ಇಟ್ಟು ಮಗನ ಊಟದ ಬಾಕ್ಸಿಗೆ ಹಾಕಿ ಕಳುಹಿಸಿದರೆ ಅದು ವಾಪಸ್ ಬರಬಹುದು. ಅದರೆ ಚಿಪ್ಸ. ಕುರುಕುರೆ ಅದ್ರೆ ಖರ್ಚಾಗಿರುತ್ತದೆ. ಮೊದಲಿನ ತರಹ ದೋಸೆ, ಇಡ್ಲಿ ,‌ ಚಪಾತಿ ಇವೆಲ್ಲ ಬೇಡದವು. ಕಾರಣ ಮಕ್ಕಳು ಅಗಾಗ ಖಾಯಿಲೆ ಬಿದ್ದು, ಓದಿಗೆ ತೊಂದರೆ ಅಗುತ್ತದೆ. ನಾವು ಚಿಕ್ಕವರಿದ್ದಾಗ ಅಂಗಡಿಗೆ ದುಡ್ಡು ಹಾಕಿ ತಿನ್ನಬಾರದು ಎನ್ನುತ್ತಿದ್ದರು. ಅದರೆ ಈಗ ಅಪ್ಪ ಅಮ್ಮ ಸ್ವತಃ ತಾವೇ ಮಕ್ಕಳಿಗೆ ಬೇಕಾದ ತಿಂಡಿ ತಂದಿರುತ್ತಾರೆ. ಮಕ್ಕಳು ಮುದ್ದಿಗೆ ತಮಗಿಷ್ಟವಾದುದನ್ನು ಹಠ ಮಾಡಿ ತಿನ್ನುತ್ತಾರೆ. ಕಾರಣ ಇಂದು ಹೊಟೆಲ್ ಉದ್ಯಮ ಕೂಡ ಬೆಳೆದಿದೆ. ರಜಾ ಇದ್ದರೆ ಹೊಟೆಲ್ ಊಟ, ವಿಶೇಷ ದಿನವಿದ್ದರೆ ಹೊಟೆಲ್. ಮನೆ ಊಟ ಹಿಡಿಸದಿದ್ದರೆ ಹೊಟೆಲ್ ಹೀಗೆ ಹೊರಗಿನ ತಿಂಡಿ ತೀರ್ಥಗಳು ಮಕ್ಕಳಿಗೆ ದೊರೆತು ಮನೆಯ ರುಚಿಗೆ ಬಾಯಿ ಕೆಟ್ಟುಹೋಗುತ್ತಿದೆ. ಕಾರಣ ಬೊಜ್ಜು. ಹೊಟ್ಟೆ ನೋವು. ಶೀತ ಕಫ. ಅಷ್ಟಲ್ಲದೆ ಕೆಲವರಿಗೆ ಬಿಪಿ ಶುಗರ್ ಕೂಡ ಬಂದಿದೆ. ಮಕ್ಕಳು ಅರೋಗ್ಯವಾಗಿರಲು ಪೌಷ್ಟಿಕ ಅಹಾರ ಬೇಕು. ಸತ್ವಯುತ ಕಾಳು ಬೇಳೆ ತಿನ್ನಬೇಕು. ಹಾಲು ಹೈನು ಬೇಕು. ಮನೆಯಲ್ಲಿ ಹಸು ಕಟ್ಟಿ ಹಾಲು ಬೆಣ್ಣೆ ಮೊಸರು ತುಪ್ಪ ತಿಂದ ಜನ ಗಟ್ಟಿ. ಮನೆಯಲ್ಲಿ ಬೆಳೆದ ತರಕಾರಿ ತಿಂದ ಜನ ಇಂದಿಗೂ ಕೆಲಸ ಮಾಡುತ್ತಾರೆ.


ಅದರೆ ಈಗ ಕಲುಷಿತ ಅಹಾರ ಅಪೌಷ್ಟಿಕ ಅಹಾರ ಅರೋಗ್ಯವನ್ನೇ ಕಿತ್ತುಕೊಂಡಿದೆ. ಮಾನಸಿಕವಾಗಿ ನೆನಪಿನ ಶಕ್ತಿ
ಕಡಿಮೆಯಾಗಿದೆ. ಮಕ್ಕಳಿಗೆ ಓದಿನಲ್ಲಿ ಅಸಕ್ತಿ ಕಡಿಮೆಯಾಗಿ
ಬೇರೆಬೇರೆ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ. ಅಹಾರದಲ್ಲಿ ತಂಪು. ರುಚಿ ಶುಚಿ ಸತ್ವ ಎಲ್ಲವೂ ಇದ್ದು ಅದು ಸಂಪೂರ್ಣ ತ್ರಪ್ತಿ ನೀಡಿ ಮನಸಿಗೆ ಸಂತೋಷ ಕೊಡಬೇಕು. ತಿನ್ನುವಾಗ ಅದರ ಸ್ವಾದ ವನ್ನು ಎಂಜಾಯ್ ಮಾಡಿರಬೇಕು. ಅಹಾರವು ಮನುಷ್ಯನ ಜೀವನ ಕ್ರಮಕ್ಕೆಅತ್ಯಗತ್ಯ ವಾದ ಪೂರಕ ಅಂಶ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಸತ್ಯ,ಅರ್ಥಪೂರ್ಣ.ಅಲ್ಲವೇ!

ಕಲ್ಪನಾಅರುಣ